ಪುಟಗಳು

ಬುಧವಾರ, ಸೆಪ್ಟೆಂಬರ್ 11, 2013

ವಿದ್ವತ್ ಪರೀಕ್ಷೆಗಳು ನಮಗೆ ಬೇಕೇ ?

ಆತ್ಮಿಯರೇ
ಕರ್ನಾಟಕ ಸರಕಾರ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಜೂನೀಯರ,ಸಿನೀಯರ ಮತ್ತು ವಿದ್ವತ್ ಪರೀಕ್ಷೆಗಳು ನಮಗೆ ಬೇಕೇ ?  ಪರೀಕ್ಷೆಗಳು ಅವ್ಯವಹಾರದ ತಾಣವಾಗಿವೆ. ದುಡ್ಡಿದ್ದ ದಡ್ಡ ಸಿಖಾಮಣಿಗಳಿಗೆ ದೊಡ್ಡ ಪ್ರಮಾಣದ ಅಂಕು ನೀಡಿ ದುಡ್ಡು ಮಾಡಿಕೊಳ್ಳುವ ಹುಲ್ಲುಗಾವಲವಾಗಿರುವ ಈ ಪರೀಕ್ಷೆಗಳು ಬೇಕೇ ? ಈ ಪರೀಕ್ಷೆಗಳಿಂದ ಮತ್ತು ಕೆಲವೇ ಕೆಲವರನ್ನು ಹೊರತುಪಡಿಸಿ ,ಪರೀಕ್ಷರಾಗಿ ಬರುವದಕ್ಕಾಗಿಯೇ ಪರೀಕ್ಷೆ ಮಾಡಿಕೊಂಡು ಪರೀಕ್ಷರಾಗಿ ಬರುವ ಸಂಗೀತ,ನೃತ್ಯ ಕಲಾ ಶತ್ರುಗಳಿಂದ ಈ ಕಲೆ ಉಳಿಯಲು ಬೆಳೆಯಲು ಸಾಧ್ಯವೇ ? ಹಾಗಾದರೆ ಬಿ ಮ್ಯೂಜಿಕ ಎಂ ಮ್ಯುಜಿಕ ಪದವಿಗಳು ಯಾಕೆ ಬೇಕು ? ಇನ್ನು ಹತ್ತು ಹಲವರು ಕಾರಣಗಳನ್ನು ಕೊಡಬಹುದು. ಈಗಾಗಲೇ ಈ ಪರೀಕ್ಷೆಗಳು ರದ್ದುಮಾಡುವಂತೆ ಧಾರವಾಡದಲ್ಲಿ ನಡೆದ ವಾದ್ಯ ಸಂಗೀತ ಕಲಾವಿದರ ಸಮಾವೇಶದಲ್ಲಿ ಚರ್ಚಿಸಲಾಗಿದೆ ಇದಕ್ಕೆ ಇನ್ನಷ್ಟು ವ್ಯಾಪಕ ಚರ್ಚೆಗೆ ಅವಕಾಶ ನೀಡಲು ಈ ವಿಷಯ ನಿಮ್ಮ ಮುಂದೆ ಇಟ್ಟು ನಿಮ್ಮ ಅಭಿಪ್ರಾಯ ಪಡೆಯಲು ಮುಂದಾಗಿದ್ದೇನೆ ಇದಕ್ಕೆ ನೀವೇನಂತಿರಿ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ