ಪುಟಗಳು

ಶುಕ್ರವಾರ, ಸೆಪ್ಟೆಂಬರ್ 27, 2013

ಪಂ.ಪುಟ್ಟರಾಜರೇ ಹುಟ್ಟು ಹಾಕಿಕೊಟ್ಟ ಸಂಸ್ಥೆ


ಸಂಸ್ಥೆಯ ಸಂಕ್ಷಿಪ್ತ ಪರಿಚಯ
==================

ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಕಲಾವಿದರ ಕಲ್ಯಾಣಕ್ಕಾಗಿ ಮತ್ತು ಸಂಗೀತ ಕ್ಷೇತ್ರದ ಸುಧಾರಣೆಗಾಗಿ ಮತ್ತು ಕಲಾವಿದರನ್ನು ಸಂಘತಟಿಸುವದಕ್ಕಾಗಿ ಅಸ್ತಿತ್ವಕ್ಕೆ ತರಲಾಗಿದೆ (ಸ್ಥಾಪನೆ 1996 ನೋಂ,ಸಂ:248 )ನಮ್ಮ ಉದ್ದೇಶ: ಸಂಗೀತ ನೃತ್ಯ ಶಿಕ್ಷಕರ ನೇಮಕಾತಿಯಲ್ಲಿ ಬಿ. ಮ್ಯೂಜಿಕ್, ಎಂ ಮ್ಯೂಜಿಕ್ ಪದವಿಧರರಿಗೆ ಮಾತ್ರ ಅವಕಾಶ ನೀಡಬೇಕು, ಕರ್ನಾಟಕ ಸರಕಾರ ನಡೆಸುವ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷೆಗಳು ರದ್ದು ಮಾಡಬೇಕು, ಸಂಗೀತವೆಂದರೆ ಹಾಡುಗಾರಿಕೆ ಮಾತ್ರವಲ್ಲ ಎಂಬುದು ಸರಕಾರದ ಗಮನಕ್ಕೆ ತಂದು ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ಶಾಸ್ತ್ರಿಯ ವಾದ್ಯ ಸಂಗೀತ ಪದವಿಧರರನ್ನು ಸಮಾನವಾಗಿ ತುಂಬಿಕೊಳ್ಳ ಬೇಕು, ಕ್ರೀಡಾ ಪಟುಗಳಿಗೆ ನಿಡುವ ಉದ್ಯೋಗ ಮೀಸಲಾತಿ ಕಲಾವಿದರಿಗೂ ಸಿಗಬೇಕು,ಸಂಸ್ಕೃತ ಮತ್ತು ಉರ್ದು ಶಾಲೆಗಳಿಗೆ ಅನುದಾನ ನೀಡುತ್ತಿರುವಂತೆ  ಸಂಗೀತ,ನೃತ್ಯ ಶಾಲೆಗಳಿಗೂ ಅನುದಾನ ನೀಡಬೇಕು, ಕಲಾವಿದರಿಗೆ ಯಸಶ್ವಿನಿ ಯೋಜನೆಯ ವೈದ್ಯಕೀಯ ಲಾಭ ಸಿಗುವಂತಾಗ ಬೇಕು ಇನ್ನು ಹತ್ತು ಹಲವಾರು ಸುಧಾರಣೆಗಳಾಗ ಬೇಕು,
ಕಲಾವಿದರ ಮತ್ತು ಕಲಾಶಿಕ್ಷಣ ಸಂಸ್ಥೆಗಳ ಕಲ್ಯಾಣಕ್ಕಾಗಿ ಪಂ.ಪುಟ್ಟರಾಜರ ಅಪ್ಪಣೆಯಮೇರೆಗೆ  ಗುರು ಪುಟ್ಟರಾಜರೇ ಸೂಚಿಸಿದ ಈ ಹೆಸರಿನೊಂದಿಗೆ ಅಸ್ತಿತ್ವಕ್ಕೆ ತರಲಾಗಿದೆ.  ದಿನಾಂಕ 8-ನವಂಬರ -1996 ರಂದು ಸಂಗೀತ ಶಾಲೆಯ ಮುಖೊಪಾಧ್ಯಾಯರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಸಂಗೀತ ಶಾಲೆಗಳಿಗೆ ಅನುದಾನ ನೀಡಲು ಸರಕಾರಕ್ಕೆ ಒತ್ತಾಯಿಸುವ ನಿರ್ಣಯ ಕೈಗೊಂಡು ಕಳುಹಿಸಲಾಯಿತು ನಿರಂತರ ಹೊರಟಮಾಡಿದ ಫಲವಾಗಿ ಇಂದು ಆಶ್ರಮದ ಸಂಗೀತ ಶಾಲೆ ಸರಕಾರದ ಅನುದಾನಕ್ಕೆ ಒಳಪಟ್ಟಿದೆ ಇದು ನಮ್ಮ ಪರಿಷತ್‌ನ ಹೋರಾಟದ ಫಲವಾಗಿ 15 ವರ್ಷಗಳ ನಂತರ ಸಿಕ್ಕ ಪ್ರತಿ ಫಲವಾಗಿದೆ. ಈ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಸಂಗೀತ ಶಿಕ್ಷರ ನೇಮಕಾತಿಗಾಗಿ ಹೋರಾಟ ಮಾಡಿಕೊಂಡು ಬಂದ ಫಲವಾಗಿ ಸಂಗೀತ ಶಿಕ್ಷಕರ ನೇಮಕಾತಿ ಯಾಗುತ್ತಿವೆ ಕಲಾವಿದರ ಕಲಾಕ್ಷೇತರದ ಕಲ್ಯಾಣ ಈ ಪರಿಷತ್ ನದ್ದಾಗಿದೆ

===========================
ಕಾರ್ಯಕ್ರಮ ಸ್ವರೂಪ
===========================

ಈ ಕಾರ್ಯಕ್ರಮವು ಉತ್ತರ ಕರ್ನಾಟಕದ ಸಂಗೀತ ನೃತ್ಯ ಚಿತ್ರಕಲೆ ಜಾನಪದ ಮೊದಲಾದ ಕಲೆಗಳ ದಿಗ್ಗಜರನ್ನು ಸ್ಮರಿಸಿ ಕೊಳ್ಳುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮದ ಮೂಲಕ ಎಲ್ಲ ಕಲೆಗಳ ಮತ್ತು ಕಲಾ ಪರಂಪರೆಯ ಶಿಷ್ಯ ಪ್ರಶಿಷ್ಯರು ಅಭಿಮಾನಿಗಳು ಒಂದೇಕಡೆ ಸೇರಿಸುವ ಪ್ರಯತ್ನವಾಗಿದೆ. ಉತ್ತರ ಕರ್ನಾಟಕದ ಯಾವುದಾದರು ಒಂದು ಜಿಲ್ಲೆಯಲ್ಲಿ ಈ ಸಮಾರಂಭ ಹಮ್ಮಿಕೊಳ್ಳಲಾಗುವುದು. ಯುವ ಕಲಾವಿದರೊಂದಿಗೆ ಹಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಹೊರ ರಾಜ್ಯದ ಕಲಾವಿದರನ್ನು ಕೂಡ ಆಮಂತ್ರಿಸಿ ಇಲ್ಲಿನ ಪ್ರತಿಭೆಗಳ ಪರಿಚಯ ಮಾಡಿಕೊದಲಾಗಿವುದು ಕನಿಷ್ಠ ಮೂರು ದಿನಗಳಾದರು ಹಮ್ಮಿಕೊಳ್ಳಲಾಗುವುದು ಮುಂದಿನ ದಿನಗಳಲ್ಲಿ ಇದು ವಾರಗಳ ಕಾಲ ಏರ್ಪಡಿಸುವ ಆಶೆ ಹೊಂದಿದ್ದೇವೆ .